ಮಹಾದೇವ ಗೋವಿಂದ ರಾನಡೆ ಅವರು ಸಮಾಜ ಸುಧಾರಕರಾಗಿ, ರಾಜಕಾರಣಿಯಾಗಿ, ಲೇಖಕರಾಗಿ, ವಿದ್ವಾಂಸರಾಗಿ ಪ್ರಸಿದ್ಧಿ ಹೊಂದಿದವರು. ತಮ್ಮ ಜೀವನವನ್ನೇ ದೇಶಸೇವೆಗೆ ಮುಡಿಪಾಗಿಡಲು ಪ್ರೇರೇಪಿಸಿದ ರಾಷ್ಟಿçÃಯತಾವಾದಿಗಳಲ್ಲಿ ರಾನಡೆ ಅವರು ಪ್ರಮುಖರು. ಪ್ರಾರ್ಥನಾ ಸಮಾಜ, ಪೂನಾ ಸಾರ್ವಜನಿಕ ಸಭಾದ ಸ್ಥಾಪಕರಾಗಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಅಪಾರ ಜನಪ್ರಿಯತೆಗಳಿಸಿದ್ದರು. ಭಾರತ ರಾಷ್ಟಿçÃಯ ಕಾಂಗ್ರೆಸ್ನ ಸ್ಥಾಪಕ ಸದಸ್ಯರಾಗಿದ್ದರು.
ಪರಿಚಯ: ಮಹಾದೇವ ಗೋವಿಂದ ರಾನಡೆ ಅವರು ಜನವರಿ ೧೮, ೧೮೪೨ ರಂದು ನಾಸಿಕ್ನ ನಿಫಾಡ್ನಲ್ಲಿ ಜನಿಸಿದರು. ರಾನಡೆಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಲ್ಲಾಪುರದಲ್ಲಿ ಪಡೆದರು, ಮರಾಠಿ ಮತ್ತು ಇಂಗ್ಲಿಷ್ ಅಭ್ಯಾಸ ಮಾಡಿದರು. ೧೮೬೨ರಲ್ಲಿ ರಾನಡೆ ಅವರು ಬಾಂಬೆ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದು, ೧೮೬೪ ರಲ್ಲಿ ಎಂಎ ಪದವಿಯನ್ನು, ೧೮೬೬ ರಲ್ಲಿ ಎಲ್ ಎಲ್ ಬಿ ಪದವಿ ಪಡೆದರು.
ವೃತ್ತಿ ಜೀವನ: ೧೮೬೮ರಲ್ಲಿ ಅವರು ಎಲ್ಫಿನ್ನೊ÷್ಸÃನ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ೧೮೭೧ ರಲ್ಲಿ ಅವರು ಪುಣೆಯಲ್ಲಿ ಅಧೀನ ನ್ಯಾಯಾಧೀಶರಾಗಿ ನೇಮಕಗೊಂಡರು. ನಂತರ ಬಾಂಬೆ ರಾಜ್ಯದ ಅತ್ಯಂತ ಕಿರಿಯ ಭಾರತೀಯ ನ್ಯಾಯಶಾಸ್ತ್ರಜ್ಞರಾದರು. ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಆಗಿ, ಅವರು ಬಾಂಬೆ ಸ್ಮಾಲ್ ಕಾಸಸ್ ಕೋರ್ಟ್ನಲ್ಲಿ ನಾಲ್ಕನೇ ನ್ಯಾಯಾಧೀಶರ ಶ್ರೇಣಿಯನ್ನು ಹೊಂದಿದ್ದರು. ಅವರು ಪುಣೆಯಲ್ಲಿ ಪ್ರಥಮ ದರ್ಜೆ ಸಬ್ ಜಡ್ಜ್ ಆಗಿಯೂ ಸೇವೆ ಸಲ್ಲಿಸಿದರು.
ರಾನಡೆಯವರು ಸ್ವದೇಶಿಯ ಬೆಂಬಲಿಗರಾಗಿದ್ದು, ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಪ್ರತಿಪಾದಿಸಿದರು. ಅವರು ತಮ್ಮ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಯ ಸಿದ್ಧಾಂತದ ಮೇಲೆ ಸ್ಥಾಪಿಸಲಾದ ಬಾಂಬೆ ಆಂಗ್ಲೋ-ಮರಾಠಿ ದೈನಿಕ ಪತ್ರಿಕೆಯಾದ ‘ಇಂದು ಪ್ರಕಾಶ್’ ಸಂಪಾದಿಕರಾಗಿದ್ದರು. ಅವರು ಹಲವಾರು ಶಾಲೆಗಳನ್ನು ಸ್ಥಾಪಿಸಿದ ಅತ್ಯುತ್ತಮ ಶಿಕ್ಷಣ ತಜ್ಞರೂ ಆಗಿದ್ದರು. ೧೮೬೧ ರಲ್ಲಿ, ಅವರು ವಿಧವಾ ವಿವಾಹ ಸಂಘದ ಸಂಸ್ಥಾಪಕರಾಗಿದ್ದರು. ಅವರು ಭಾರತೀಯ ಅರ್ಥಶಾಸ್ತç ಮತ್ತು ಮರಾಠ ಇತಿಹಾಸದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ.
ಮಹಾದೇವ್ ಗೋವಿಂದ ರಾನಡೆ ಅವರು ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ಉದಾರವಾದದ ತತ್ತ್ವಗಳ ಆಧಾರದ ಮೇಲೆ ರಾಷ್ಟಿçÃಯ ಅಭಿವೃದ್ಧಿಯಾಗಬೇಕು ಎಂದು ನಂಬಿದ್ದರು. ವಿದೇಶಿ ಆಡಳಿತವು ಸಮಾಜದ ಬೌದ್ಧಿಕ, ನೈತಿಕ ಮತ್ತು ಸಾಂಸ್ಕೃತಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅವರು ಅರಿತುಕೊಂಡರು. ೧೮೮೫ರಲ್ಲಿ, ರಾನಡೆ ಅವರು ಬಾಂಬೆ ಶಾಸಕಾಂಗ ಮಂಡಳಿಯ ಸದಸ್ಯರಾದರು. ಕೇಂದ್ರ ಹಣಕಾಸು ಸಮಿತಿಯ ಸದಸ್ಯತ್ವವನ್ನೂ ಹೊಂದಿದ್ದರು.
ಮಹಾದೇವ್ ಗೋವಿಂದ ರಾನಡೆ ಅವರು ಜನವರಿ ೧೬, ೧೯೦೧ ರಂದು ಪುಣೆಯಲ್ಲಿ ನಿಧನರಾದರು.