ಕಾಶ್ಮೀರದಲ್ಲಿ ಹಿಂದೆ ಊಹಿಸಲೂ ಸಾಧ್ಯವಿಲ್ಲ ಎಂದು ಭಾವಿಸಲಾಗಿದ್ದ ಘಟನೆಗಳು ಇಂದು ನಡೆಯುತ್ತಿವೆ. ಕಾಶ್ಮೀರದ ಹೃದಯಭಾಗವಾದ ಶ್ರೀನಗರದ ಲಾಲ್ ಚೌಕ್ನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಹಿಂದೂಗಳು ಈ ಬಾರಿ ನಿರ್ಭಯವಾಗಿ ಆಚರಿಸಿದ್ದಾರೆ. ಈ ಬೆಳವಣಿಗೆ ಆಧ್ಯಾತ್ಮಿಕ ಸ್ವರೂಪದ್ದಾಗಿದ್ದರೂ, ಈ ಪ್ರದೇಶದಲ್ಲಿ ಸಂಭವಿಸುತ್ತಿರುವ ವಿಶಾಲವಾದ ಪರಿವರ್ತನೆಯನ್ನು ಆಳವಾಗಿ ಸಂಕೇತಿಸುತ್ತದೆ, ಇದು ಬದಲಾಗುತ್ತಿರುವ ಕಾಶ್ಮೀರದ ವಾಸ್ತವಗಳ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ದಶಕಗಳ ಕಾಲ, ಕಾಶ್ಮೀರ ಕಣಿವೆ ಸೂಕ್ಷö್ಮ, ಸಂಘರ್ಷ ಪೀಡಿತ ವಲಯವಾಗಿ ಉಳಿದಿತ್ತು, ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಕಾರ್ಯಕ್ರಮಗಳು ಅಶಾಂತಿಯ ಭಯದಿಂದ ನಿಗ್ರಹಿಸಲ್ಪಟ್ಟಿದ್ದವು ಅಥವಾ ನಿರ್ಬಂಧಿಸಲ್ಪಟ್ಟವು. ನಿರ್ದಿಷ್ಟವಾಗಿ ಲಾಲ್ ಚೌಕ್ ರಾಜಕೀಯ ಅಸ್ಥಿರತೆಯ ಸಂಕೇತವಾಗಿ ನಿಂತಿತ್ತು, ಒಂದು ಕಾಲದಲ್ಲಿ ಪ್ರತ್ಯೇಕತಾವಾದಿ ಘೋಷಣೆಗಳು ಪ್ರತಿಧ್ವನಿಸಿದ ಸ್ಥಳವಾಗಿತ್ತು ಮತ್ತು ರಾಷ್ಟçಧ್ವಜವನ್ನು ಹಾರಿಸುವುದು ತೀವ್ರ ವಿವಾದದ ವಿಷಯವಾಗಿತ್ತು.
ಆದರೆ ಈಗ ಲಾಲ್ಚೌಕ್ ಸ್ಥಳವು ಭಕ್ತಿಗೀತೆಗಳು, ಮೆರವಣಿಗೆಗಳು ಮತ್ತು ಸ್ಪಷ್ಟವಾದ ಏಕತೆಯ ಪ್ರಜ್ಞೆಯೊಂದಿಗೆ ಸಂಪೂರ್ಣವಾದ ಶಾಂತಿಯುತ ಜನ್ಮಾಷ್ಟಮಿ ಆಚರಣೆಗಳಿಗೆ ಸಾಕ್ಷಿಯಾಗಿದೆ ಎಂಬುದು ಹೊಸ ಕಾಶ್ಮೀರದತ್ತ ಪ್ರಯಾಣದಲ್ಲಿ ಒಂದು ಮೈಲಿಗಲ್ಲು. ನಿರ್ಣಾಯಕ ಆಡಳಿತ, ಭದ್ರತಾ ಸುಧಾರಣೆಗಳು ಮತ್ತು ಸಮಗ್ರ ರಾಷ್ಟ್ರೀಯತೆಯ ದೃಷ್ಟಿಕೋನದ ಮೂಲಕ ಇದು ಸಾಧ್ಯವಾಗಿದೆ.