ನಮ್ಮನ್ನು ಅನುಸರಿಸಿ: Facebook Twitter Instagram YouTube

ಎಲ್ಲರ ಧಾರ್ಮಿಕ ಭಾವನೆಗಳನ್ನೂ ಗೌರವಿಸೋಣ

ಅಪ್‌ಲೋಡ್ ಮಾಡಿದ ದಿನಾಂಕ: 09-12-2025 19:04

ಎಲ್ಲರ ಧಾರ್ಮಿಕ ಭಾವನೆಗಳನ್ನೂ ಗೌರವಿಸೋಣ
‘ನಾವು ಯಾವುದೇ ಮತವನ್ನು ಸಹಿಸಿಕೊಳ್ಳುವುದಿಲ್ಲ, ಬದಲಾಗಿ ಒಪ್ಪಿಕೊಳ್ಳುತ್ತೇವೆ’ ಎಂಬ ಸ್ವಾಮಿ ವಿವೇಕಾನಂದರ ಮಾತು ಭಾರತದ ಅಸ್ಮಿತೆಯನ್ನು ತಿಳಿಸುತ್ತದೆ. ಸಹಿಷ್ಣುತೆಯ ಪದದಲ್ಲೇ ಸಹಿಸಿಕೊಳ್ಳುವುದು ಎಂಬ ಅರ್ಥ ಬರುತ್ತದೆ. ಆದರೆ ಭಾರತದ ಗುಣಧರ್ಮ ಎಲ್ಲಾ ಧರ್ಮ-ಮತ-ಪಂಥಗಳನ್ನು ಒಪ್ಪಿಕೊಳ್ಳುತ್ತದೆ. ನಿಮ್ಮಲ್ಲಿನ ಸತ್ಯವನ್ನೂ ನಾವು ಗೌರವಿಸುತ್ತೇವೆ ಎಂದು ಹೇಳುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಆಗಾಗ ನಾವು ಕೇಳುವ ‘ಕೋಮುವಾದ’, ‘ಅಸಹಿಷ್ಣುತೆ’, ‘ಜಾತ್ಯತೀತ’ ಇತ್ಯಾದಿ ಪದಗಳು ಸಮಾಜದಲ್ಲಿ ಅನೇಕ ಗೊಂದಲಗಳಿಗೆ ಕಾರಣವಾಗಿದೆ. ಈ ಗೊಂದಲಗಳಿಗೂ ಮೂಲ ಕಾರಣ ‘ಶ್ರೇಷ್ಠತೆಯ ವ್ಯಸನ’. ನಮ್ಮದೇ ಶ್ರೇಷ್ಠ/ ನಮ್ಮದು ಮಾತ್ರ ಶ್ರೇಷ್ಠ ಎಂಬ ಭಾವ ಮೂಡಿದಾಗ ಈ ಅವಾಂತರಗಳಿಗೆ ಕಾರಣವಾಗುತ್ತದೆ. ‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ – ಜಗತ್ತಿನ ಮೂಲೆಮೂಲೆಗಳಿಂದ ಶ್ರೇಷ್ಠವಾದ ಸಂಗತಿಗಳು ನಮ್ಮೆಡೆಗೆ ಹರಿದು ಬರಲಿ ಎಂಬ ಶ್ರೇಷ್ಠ ಚಿಂತನೆಯ ನಾಡಿದು. ಅಂತಹ ನಾಡಿನ ಪ್ರಜೆಗಳಾದ ನಾವು ಎಲ್ಲಾ ಜಾತಿ, ಮತ, ಪಂಥ, ಸಂಪ್ರದಾಯ, ಉಪಾಸನಾ ಪದ್ಧತಿ, ಸಮುದಾಯಗಳ ಬಗ್ಗೆ ಸಮಾನ ಗೌರವವನ್ನು ನೀಡೋಣ.
⬅ ಮುಖಪುಟ